ನವೋದಯ ವಿದ್ಯಾಲಯ ಮತ್ತು ಕೇಂದ್ರದ ಆಶಯ

ಘನ ಭಾರತ ಸರ್ಕಾರದ ಭಾಷಾನೀತಿಯನ್ನು ಜಾರಿ ಮಾಡಲು ನಾನಾಸಂಸ್ಥೆಗಳ ಮೂಲಕ ಪ್ರಯತ್ನಗಳು ನಡೆಯುತ್ತಿದ್ದರೂ, ಅದರಲ್ಲಿ ಪ್ರಮುಖವಾದದ್ದು ಮಾನವ ಸಂಪನ್ಮೂಲ ಇಲಾಖೆಯ ಯೋಜನೆಗಳು. ಈ ಇಲಾಖೆಯ ಅಡಿಯಲ್ಲೇ ಬರುವ ನವೋದಯ ವಿದ್ಯಾಲಯದ (ಇದು ಸಚಿವರೇ ಅಧ್ಯಕ್ಷರಾಗಿರುವ ಸ್ವಾಯತ್ತ ಸಂಸ್ಥೆ!) ಬಗ್ಗೆ ಮೊನ್ನೆ ಒಂದು ಬರವಣಿಗೆ ಬರೆಯಲಾಗಿತ್ತು.

ಕೇಂದ್ರಸರ್ಕಾರದ ಭಾಷಾನೀತಿಯ ಜಾರಿಯ ವಿಧಾನ

ಅದರಲ್ಲಿ ಆಮಿಷ, ಒತ್ತಾಯ ಮತ್ತು ಉತ್ತೇಜನಗಳ ಮೂಲಕ ಹಿಂದಿಯನ್ನು ದೇಶದೆಲ್ಲೆಡೆ ಹರಡಬೇಕೆಂಬ ಭಾರತ ಸರ್ಕಾರದ ಆಶಯದಂತೆ ಕೇಂದ್ರಸರ್ಕಾರ ಹೇಗೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದೀ ಹೇರಲು ಆಮಿಷವೆನ್ನುವ ಅಸ್ತ್ರವನ್ನು ಬಳಸುತ್ತಿದೆ ಎಂಬುದನ್ನು ತೆರೆದಿಡಲಾಗಿತ್ತು. ಯಥೇಚ್ಛವಾಗಿ ಹಣ ಖರ್ಚುಮಾಡಿ ಅತ್ಯದ್ಭುತ ಸವಲತ್ತುಗಳನ್ನು ಏರ್ಪಡಿಸಿ, ಉಚಿತವಾಗಿ ಕಲಿಸುವ ವಿದ್ಯಾಲಯ ವ್ಯವಸ್ಥೆಯನ್ನು ರೂಪಿಸಿ ಅದರ ಮೂಲಕ ಹೇಗೆ ಹಿಂದೀಪ್ರಚಾರಕ್ಕೆ ಕೇಂದ್ರಸರ್ಕಾರ ಉದ್ದೇಶಿಸಿದೆ/ ತೊಡಗಿದೆ, ನಾಳಿನ ವಿದ್ಯಾರ್ಥಿಗಳಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾರ್ಥಿಗಳಲ್ಲಿ ಈ ಹಿಂದಿದೇವತೆಯನ್ನು ಒಪ್ಪುವ, ಆರಾಧಿಸುವ ಮನಸ್ಥಿತಿಯನ್ನು ಹುಟ್ಟುಹಾಕಲಾಗುತ್ತಿದೆ ಎಂಬುದನ್ನು ಬರೆಯಲಾಗಿತ್ತು.

ನವೋದಯರ ಪ್ರತಿಕ್ರಿಯೆ!

ಈ ಬರಹಕ್ಕೆ ನವೋದಯ ವಿದ್ಯಾಸಂಸ್ಥೆಯ ಹಲವಾರು ಮಾಜಿ ಮತ್ತು ಹಾಲಿ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನವೋದಯದಲ್ಲಿ ಹಿಂದಿಹೇರಿಕೆ ಇಲ್ಲವೆಂದೂ, ಹಿಂದೀ ಕಡ್ಡಾಯ ಇಲ್ಲವೆಂದೂ, ಇಂಗ್ಲೀಷಿನಲ್ಲಿರುವುದನ್ನೂ ಕನ್ನಡದಲ್ಲೇ ಹೇಳಿಕೊಡುತ್ತಿದ್ದರೆಂದೂ ಕೆಲವರು ತಿಳಿಸಿದರೆ ಮತ್ತೆ ಕೆಲವರು ತಮಗೆ ಆ ಸಂಸ್ಥೆಯಿಂದಾಗಿರುವ/ ಆಗುತ್ತಿರುವ ಉಪಕಾರ ಸ್ಮರಣೆಯನ್ನು ಮಾಡಿ, ಹಿಂದಿ ಹೇರಿಕೆ ಇತ್ಯಾದಿಗಳೆಲ್ಲಾ ಗೌಣವೆಂದೂ, ಅಂತಹ ಶಾಲೆಗಲಲ್ಲಿ ಸಿಗುತ್ತಿರುವ ಗುಣಮಟ್ಟದ ಕಲಿಕೆ ಮುಖ್ಯವೆಂದೂ ಪ್ರತಿಪಾದಿಸಿದ್ದಾರೆ. ಕೆಲವರಂತೂ ಹಿಂದಿ ಭಾರತದ ರಾಷ್ಟ್ರಭಾಷೆಯೆಂದೂ, ಭಾರತೀಯತೆ ಮೊದಲು, ಪ್ರಾದೇಶಿಕತೆ ನಂತರ ಎಂದೂ, ಕೇಂದ್ರದ ಉದ್ದೇಶ ಏನೇ ಇರಲಿ ಒಳ್ಳೆಯ ಶಾಲೆ ಕೊಟ್ಟು ಹಳ್ಳಿಗಾಡಿನ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ, ಅಷ್ಟು ಸಾಕು ಎಂದಿದ್ದಾರೆ. ಸದರಿ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಇರುವ ಮಾಹಿತಿಯನ್ನೂ ಕೆಲವರು ನಂಬಲು, ಒಪ್ಪಲು ತಯಾರಿಲ್ಲ. ಕೆಲವರು ಬರಹ ಬರೆಯುವ ಮುನ್ನ ನವೋದಯ ಶಾಲೆಗೆ ಭೇಟಿ ನೀಡಬೇಕಿತ್ತೆಂದೂ ಬರೆದಿದ್ದಾರೆ. ವಿಷಯ ಮಂಡನೆ ಮಾಡಿರುವ ಕಾಮೆಂಟುಗಳನ್ನು ಪ್ರಕಟಣೆಗೆ ಬಿಡಲಾಗಿದೆ, ಬೈಗುಳ, ಆಧಾರ ರಹಿತವಾದ ತೆಗಳಿಕೆಯ ಭಾಷೆಯವುಗಳನ್ನು ಅಳಿಸಲಾಗಿದೆ. ಈ ಎಲ್ಲಾ ಪ್ರತಿಕ್ರಿಯೆಗಳ ಒಟ್ಟು ಸಾರವೇನೆಂದರೆ ಸರ್ಕಾರ (ಕೇಂದ್ರವೋ ರಾಜ್ಯವೋ ಯಾವುದೋ ಒಂದು) ಒಟ್ಟಿನಲ್ಲಿ ಒಂದು ಶಿಸ್ತುಬದ್ಧವಾದ ಉತ್ತಮವಾದ ಶಾಲಾವ್ಯವಸ್ಥೆಯನ್ನು ಒದಗಿಸಿಕೊಟ್ಟು, ಆ ಮೂಲಕ ಸಾವಿರಾರು ಬಡ ಹಳ್ಳಿಗರಿಗೆ ಅನುಕೂಲ ಮಾಡಿಕೊಡುತ್ತಿರುವಾಗ ಅದಕ್ಕೆ ಪ್ರಾಮುಖ್ಯತೆ ಕೊಡದೆ ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ ಎಂಬುದು. ಇರಲಿ, ನವೋದಯರ ಅನಿಸಿಕೆಗಳಿಗೆ ಸಮಾಧಾನ ಹೇಳುವ ಹೊಣೆಗಾರಿಕೆ ಹೊತ್ತು ಈ ಪ್ರತಿಕ್ರಿಯೆಯನ್ನು ಬರೆಯಲಾಗುತ್ತಿದೆ.

ಸಫಲವಾಗುತ್ತಿರುವ ಕೇಂದ್ರದ ಉದ್ದೇಶ

ನವೋದಯ ವಿದ್ಯಾಲಯಗಳ ಘೋಷಿತ ಉದ್ದೇಶವೇ ಭಾರತದ ಹಳ್ಳಿಗಾಡಿನ ಪ್ರತಿಭಾವಂತ ಮಕ್ಕಳಿಗೆ ಮೂರು ಭಾಷೆಯಲ್ಲಿ ಪ್ರಾವೀಣ್ಯತೆ ಒದಗಿಸಿ ಕೊಡುವುದು. ಅಂದರೆ ತಾಯ್ನುಡಿ, ಹಿಂದೀ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿಕೊಡುವುದು. ಇದರರ್ಥ, ಈಗಾಗಲೇ ತಾಯ್ನುಡಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹಿಂದೀ ಮತ್ತು ಇಂಗ್ಲೀಷುಗಳಲ್ಲಿ ಪ್ರಾವೀಣ್ಯತೆ ತುಂಬುತ್ತೇವೆ ಎನ್ನುವುದೇ ಅಲ್ಲವೇ? ನಾವೇನೂ ಕನ್ನಡಿಗರು ಬೇರೇ ಭಾಷೆ ಕಲಿಯಬಾರದು ಎನ್ನುತ್ತಿಲ್ಲ. ಭಾರತ ಸರ್ಕಾರ ಯಾಕೆ ಹೀಗೆ ಹಿಂದೀಕಲಿಕೆಗೆ ಒತ್ತು ನೀಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಿಂದೀ ಭಾಷೆಯನ್ನು ಕಲಿಯುವ, ರಾಷ್ಟ್ರೀಯ ಏಕತೆಗಾಗಿ ಹಿಂದೀ ಬೇಕೆಂದು ನಂಬಿಸಲ್ಪಡುವ ನಮ್ಮ ಪ್ರತಿಭಾವಂತ ಮಕ್ಕಳು ಮುಂದೆ ಪ್ರತಿಷ್ಠಿತ ಸ್ಥಾನಗಳಲ್ಲಿ ದುಡಿಯುವಾಗ ಇದರಿಂದ ಅನುಕೂಲ ಆಗುವುದು ಹಿಂದೀ ತಾಯ್ನುಡಿಯ ಜನರ ವಲಸೆಗೆ ಎಂಬುದನ್ನು ಗಮನಿಸಬೇಕಾಗಿದೆ. ಭಾರತದ ಯಾವ ಮೂಲೆಗೇ ಹೋದರೂ ಹಿಂದಿಯೊಂದನ್ನೇ ಬಲ್ಲವನಿಗೆ ಯಾವ ತೊಡಕೂ ಆಗಬಾರದೆಂದು ಕೇಂದ್ರಸರ್ಕಾರ ಯೋಚಿಸಿ ಯೋಜಿಸುತ್ತಿರುವುದು ಎದ್ದು ಕಾಣುತ್ತದೆ. ಅವರಿಗೆ ತೊಂದರೆ ಕೊಡಬೇಕು ಅನ್ನುವುದು ಇಲ್ಲಿನ ವಾದವಲ್ಲ, ನಮ್ಮೂರಿಗೆ ವಲಸೆ ಬರುವವರು ನಮ್ಮ ನುಡಿಯಲ್ಲಿ ವ್ಯವಹರಿಸದಿದ್ದರೆ ನಾಳೆ ನಮ್ಮ ಇಡೀ ಕನ್ನಡ ಜನಾಂಗವೇ, ಕರ್ನಾಟಕದಲ್ಲೇ ಹಿಂದೀ ಕಲಿಯದೆ ಬದುಕಲಾಗದ ಸ್ಥಿತಿಗೆ ಈಡಾಗಬೇಕಾಗುತ್ತದೆ. ಯಾಕೆಂದರೆ...

ಕೇಂದ್ರಸರ್ಕಾರದ ಉದ್ದೇಶ ಮತ್ತು ಗುರಿಗಳು

ಇಡೀ ಭಾರತದ ಎಲ್ಲಾ ರಾಜ್ಯಗಳಲ್ಲಿ ಮೊದಲ ಕಲಿಕಾ ಮಾಧ್ಯಮ ಹಿಂದಿಯಾಗಬೇಕು. ಇದೀಗ ಹಿಂದಿ ಮತ್ತು ಇಂಗ್ಲೀಷಿನಲ್ಲಿರುವ ಆಡಳಿತ ವ್ಯವಸ್ಥೆಗಳು ಹಿಂದಿ ಮಾತ್ರಾ ಆಗಬೇಕು. ಭಾರತದ ಎಲ್ಲಾ ಕಛೇರಿಗಳೂ ಹಿಂದಿಯಲ್ಲಿ ಕಾರ್ಯನಿರ್ವಹಿಸಬೇಕು, ಆ ಕಾರಣದಿಂದ ಹೆಚ್ಚು ಹೆಚ್ಚು ಮಕ್ಕಳು ಹಿಂದೀ ಕಲಿಯಬೇಕು. (ಹೀಗಾದರೆ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಉತ್ತರ ಭಾರತೀಯರಿಗೆ ದಕ್ಷಿಣಕ್ಕೆ ವಲಸೆ ಹೋಗಲು ಅನುಕೂಲವಾಗುತ್ತದೆ.) ಇಂಗ್ಲೇಂಡಿನಲ್ಲಿ ಇಂಗ್ಲೀಷ್ ಹೇಗೋ, ಜಪಾನಿನಲ್ಲಿ ಜಪಾನೀಸ್ ಹೇಗೋ ಹಾಗೆ ಭಾರತದಲ್ಲಿ ಹಿಂದಿ ಆಗಬೇಕು. ಎಲ್ಲಾ ಭಾರತೀಯರ ಕಲಿಕೆ, ದುಡಿಮೆ, ಸಂಶೋಧನೆ, ಬದುಕು, ಆಡಳಿತ... ಪ್ರತಿಯೊಂದೂ ಹಿಂದಿಯಲ್ಲಾಗಬೇಕು. ಇಂತಹ ಗುರಿಯ ಬಗ್ಗೆ ಕೇಂದ್ರಸರ್ಕಾರಿ ಒಡೆತನದ www.rajbhasha.nic.in ಅಂತರ್ಜಾಲ ತಾಣದಲ್ಲಿ ವಿವರವಾಗಿ ನೋಡಬಹುದು.

ಇಂತಹ ಗುರಿ ಈಡೇರಿಕೆಗಾಗೇ ನವೋದಯ ಸಂಸ್ಥೆಯಂತಹುದನ್ನು ಕಟ್ಟಿರುವುದು. ಇದನ್ನು ಸಾಧಿಸಲು ರಾಷ್ಟ್ರೀಯ ಏಕತೆ, ದೇಶಭಕ್ತಿ ಎಂಬವುಗಳನ್ನು ಉದ್ದೀಪಿಸುವುದು. ಆದರೆ ನಿಜ ಉದ್ದೇಶ ಹಿಂದೀ ವಸಾಹತು ಸ್ಥಾಪನೆ. ಇದುವರೆವಿಗೂ ಪ್ರತಿಜಿಲ್ಲೆಯಿಂದ ಸುಮಾರು ಎಂಬತ್ತು ಮಕ್ಕಳು, ಪ್ರತಿವರ್ಷ ಈ ಹಿಂದಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ತಲೆಯಲ್ಲಿ ತುಂಬಿಕೊಂಡು ಹೊರಬರುತ್ತಿದ್ದಾರೆ. ಅಂದರೆ ಪ್ರತಿವರ್ಷ ಎರಡು ಸಾವಿರಕ್ಕೂ ಹೆಚ್ಚು ಅಚ್ಚ ಕನ್ನಡಿಗರು, ಬುದ್ಧಿವಂತರು, ಒಳ್ಳೆಯ ಉದ್ಯೋಗಗಳಲ್ಲಿ ಕೆಲಸ ಮಾಡುವ ಅವಕಾಶವಿರುವವರು, ಸಮಾಜದಲ್ಲಿ ಪ್ರಭಾವ ಹೊಂದಲಿರುವ ಪ್ರತಿಭಾಶಾಲಿಗಳನ್ನು ಈ ಸಂಸ್ಥೆ ಹೊರತರುತ್ತಿದೆ. ಇವರಲ್ಲಿ ಯಾರಿಗೂ ಕನ್ನಡದ ಬಗ್ಗೆ ಈ ಸಂಸ್ಥೆ ಕೆಟ್ಟದ್ದೇನನ್ನೂ ಹೇಳಿಕೊಟ್ಟಿಲ್ಲ ಅನ್ನುವುದು ನಿಜವಿರಬಹುದು, ಆದರೆ ಆಳದಲ್ಲಿ ಹಿಂದೀ ಭಾಷೆಯ ಬಗ್ಗೆ ಸ್ವೀಕಾರಾರ್ಹತೆಯನ್ನು ತುಂಬಲಾಗಿದೆ. ಇಷ್ಟು ಸಾಕಲ್ಲವೇ? ಭಾರತದ ವೈವಿಧ್ಯತೆಯ ಬಗ್ಗೆ ಪಾಠ ಮಾಡುವ ಇವರು ಎಲ್ಲಾ ಭಾಷೆಗಳೂ ಸಮಾನವೆಂದು ಬಾಯಲ್ಲಿ ಹೇಳಿಕೊಡಬಹುದೇನೋ, ಆದರೆ ಜತೆಯಲ್ಲಿ ಭಾರತದಲ್ಲಿ ಹಿಂದಿಗೆ ರಾಜ್‌ಭಾಷಾ ಸ್ಥಾನ ಇರುವುದೇ ಸರಿಯೆಂದು ನಂಬಿಸಿರುತ್ತಾರೆ.

ಕೇಂದ್ರದ ನಿಜ ಉದ್ದೇಶ

ಕರ್ನಾಟಕದ ನವೋದಯ ಶಾಲೆಗಳಲ್ಲಿ ಕನ್ನಡದಲ್ಲೇ ಹೇಳಿಕೊಡುತ್ತಾರೆ, ಹಿಂದಿ ಹೇರಿಕೆಯಿಲ್ಲಾ ಅನ್ನುವ ಗೆಳೆಯರು ತಿಳಿಯಬೇಕಾದ್ದು ಏನೆಂದರೆ ಈ ಬದಲಾವಣೆಗಳನ್ನು ಒಂದೇ ಬಾರಿಗೆ ಮಾಡಿ ವಿಫಲರಾಗುವ ದಡ್ಡತನ ಕೇಂದ್ರ ಮಾಡುವುದಿಲ್ಲ. ಅವರದ್ದೇನಿದ್ದರೂ ನಿಧಾನವಾಗಿ ಹೆಜ್ಜೆಹೆಜ್ಜೆಯಾಗಿ ನಮ್ಮ ತಾಯ್ನುಡಿಯನ್ನು ನಮ್ಮ ಕೈಗಳಿಂದಲೇ ಅಲ್ಲಿಂದ ಬಡಿದೋಡಿಸುವ ತಂತ್ರಗಾರಿಕೆ. ಇಲ್ಲದಿದ್ದರೆ ನವೋದಯ ಶಾಲೆಗಳ ಆಡಳಿತದಲ್ಲಿ ಎಷ್ಟರಮಟ್ಟಿಗೆ ಹಿಂದಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅಧ್ಯಯನ ಮಾಡಲು ಸಂಸತ್ತಿನ ಸಮಿತಿಯನ್ನು ನೇಮಿಸುವ ಅಗತ್ಯವಿರಲಿಲ್ಲ ಅಲ್ಲವೇ? ಈ ಸಮಿತಿಯು ಹಿಂದೀ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಹಂತಗಳ ಕಲಿಕಾ ಮಾಧ್ಯಮವಾಗಲಿ ಎಂದು ಶಿಫಾರಸ್ಸು ಮಾಡುತ್ತಿರಲಿಲ್ಲ ಅಲ್ಲವೇ? ಕೇಂದ್ರಕ್ಕೆ ಹಿಂದೀ ಹೇರಿಕೆಯ ಗುರಿ ಇಲ್ಲದಿದ್ದರೆ ನವೋದಯ ಶಾಲೆಗಳಲ್ಲಿ ವಿಜ್ಞಾನ ಗಣಿತಗಳನ್ನು ಬಿಟ್ಟು ಉಳಿದದ್ದನ್ನೆಲ್ಲಾ ಹಿಂದಿಯಲ್ಲಿ ಕಲಿಸುತ್ತೇವೆ ಎಂದು ಘೋಷಿಸಿಕೊಳ್ಳುವ ಬದಲು ಆಯಾ ರಾಜ್ಯದ ಭಾಷೆಯಲ್ಲಿ ಕಲಿಸುತ್ತೇವೆ ಎಂದು ಬರೆದುಕೊಳ್ಳುತ್ತಿದ್ದರಲ್ಲವೇ?

ಒಟ್ಟಾರೆ ನವೋದಯದಂತಹ ಉತ್ತಮ ಗುಣಮಟ್ಟದ ಶಾಲೆಗಳನ್ನು ಕಟ್ಟಿ, ಅದರ ಮೂಲಕ ಹಳ್ಳಿಗಾಡಿನ ಮಕ್ಕಳಿಗೆ ಕಲಿಕೆ, ಬದುಕುಗಳ ಆಮಿಷ ಒಡ್ಡಿ, ಇಡೀ ಕನ್ನಡನಾಡನ್ನು ನಾಳಿನ ಹಿಂದೀ ವಸಾಹತಾಗಿಸುವ ಹುನ್ನಾರ ಕೇಂದ್ರಕ್ಕಿರುವುದನ್ನು ಅರಿಯುವುದು ಮುಖ್ಯವಾಗಿದೆ. ಕೇಂದ್ರಸರ್ಕಾರ ಈ ಶಾಲೆಗಳಿಗೆ ಖರ್ಚು ಮಾಡುತ್ತಿರುವ ಹಣ ನಮ್ಮ ರಾಜ್ಯ ಕೇಂದ್ರಕ್ಕೆ ಕಟ್ಟುವ ತೆರಿಗೆಯಲ್ಲಿನ ಒಂದು ಸಣ್ಣಭಾಗವೇ ಹೊರತು ಕೇಂದ್ರ ನಮಗಾಗಿ ನೀಡುತ್ತಿರುವ ದಯಾಭಿಕ್ಷೆ ಏನಲ್ಲ.

ಕಲಿಕೆಯೆನ್ನುವುದನ್ನು ರಾಜ್ಯಪಟ್ಟಿಯಿಂದ ಸಂಯುಕ್ತ ಪಟ್ಟಿಗೆ ಹಾಕಿಕೊಂಡು, ಕೇಂದ್ರಸರ್ಕಾರವು ತಾನೇ ಶಾಲೆಗಳನ್ನು ಕಟ್ಟುವ ನಡೆಸುವ ಚಾಳಿಯನ್ನು ಕೈಬಿಡಬೇಕಾಗಿದೆ. ತನ್ನ ನಾಡಿನ ಮಕ್ಕಳ ಕಲಿಕೆಯು ರಾಜ್ಯಗಳ ಹೊಣೆಯಾಗಿರುತ್ತದೆ ಮತ್ತು ಕಲಿಕೆ ಅತ್ಯುತ್ತಮವಾಗಲು ವಿಕೇಂದ್ರೀಕರಣವೇ ಸರಿಯಾದುದಾಗಿದೆ. ಈಗ ನಮ್ಮ ರಾಜ್ಯಸರ್ಕಾರ ಸರಿಯಾದ ವ್ಯವಸ್ಥೆ ಕಟ್ಟಿಕೊಡಲಿ ಎನ್ನುವುದು ನಮ್ಮ ದನಿಯಾಗಬೇಕೇ ಹೊರತು, ಇವರು ಸರಿಯಿಲ್ಲ... ಅದಕ್ಕೆ ಕೇಂದ್ರಸರ್ಕಾರವೇ ಶಾಲೆ ನಡೆಸಲಿ ಅನ್ನುವುದಲ್ಲ. ಕರ್ನಾಟಕ ರಾಜ್ಯಸರ್ಕಾರವು ತ್ರಿಭಾಷಾ ಸೂತ್ರಕ್ಕೆ ಕೊನೆ ಹೇಳಿ, ಸದರಿ ಶಾಲೆಗಳನ್ನು ತಾನೇ ವಹಿಸಿಕೊಂಡು ನಡೆಸುವ ಮೂಲಕವೂ, ಇಂತಹುದೇ ಸೌಕರ್ಯ ಮತ್ತು ಗುಣಮಟ್ಟಗಳಿರುವ ಕಲಿಕೆಯನ್ನು ತಾನೇ ನೀಡುವ ಮೂಲಕವೂ ಭಾರತ ಸರ್ಕಾರದ ಹುನ್ನಾರವನ್ನು ವಿಫಲಗೊಳಿಸಬೇಕಾಗಿದೆ.

ಕೊನೆಹನಿ: ನವೋದಯದ ಕೆಲ ಗೆಳೆಯರು, ಇಡೀ ಬರಹವನ್ನು ತಮಗೆ ಸಂಸ್ಥೆಯಿಂದಾಗಿರುವ ಲಾಭದ ಹಿನ್ನೆಲೆಯಲ್ಲಿ, ತಮಗಾಗಿರುವ ಅನುಭವದ ನೆಲೆಯಲ್ಲಿ, ಪ್ರತಿಕ್ರಿಯೆ ನೀಡಿರುವಂತಿದೆ. ಇಡೀ ಬರಹವನ್ನು ಭಾರತ ದೇಶದ ಭಾಷಾನೀತಿ, ಆಡಳಿತ ನೀತಿ, ಕೇಂದ್ರಸರ್ಕಾರಕ್ಕಿರುವ ‘ಇಡೀ ಭಾರತಕ್ಕೆ ಹಿಂದಿ ಕಲಿಸುವ ಉತ್ಸಾಹ’, ಅದಕ್ಕಾಗಿ ಮಾಡಿಕೊಂಡಿರುವ ಹತ್ತಾರು ರಾಜಮಾರ್ಗಗಳು, ಒಳಸುಳಿಗಳು, ಇವುಗಳ ಹಿನ್ನೆಲೆಯಲ್ಲಿ ನೋಡಿ, ಓದಿ ಅರ್ಥ ಮಾಡಿಕೊಳ್ಳುವರೆಂಬ ಆಶಯ ನಮ್ಮದು.

5 ಅನಿಸಿಕೆಗಳು:

Anonymous ಅಂತಾರೆ...

dear editor,
forgive my english.. i am still learning kannada typing. BTW, I am from JNV Doddaballapur (1992-1999). I really appriciate your patience in the face of repeated nagativity and failed appriciation from the readers. It really pains me that so called talented navodayans falling prey for the not so hidden propaganda. It is unbelievable how well propaganda works on children. You really did your research before writing this article. Eventhough we don't write Hindi board exam in 10th, clearly, hindi is everywhere in navodaya vidyalayas (NV). for example we take oath in 3 languages (kannada, hindi, english). In my school days, i participated in kannada and hindi skits. we sang hindi and kannada songs (other languages songs too), we talked hindi and kannada. mostly watched hindi movies. If i say, students migrated from hindi states learned kannada, i am cheating myself. Offcoure there were exceptions. Being a navodayan, i learned better hindi than my village frinds who are in the army. I don't remember like speaking to hindi students in kannada. they just didn't understand kannada. I did speak kannada to them, only when i wanted to say something they didn't understand. Obvioulsy, they helped me learn hindi. In fact my hindi teacher from karnataka would have never thought hindi to me so well but for the presence of hindi speaking students from MP. Don't be fooled by 10 out of 25 marks scored by my navodaya friend. He/she definitely knows how to speak hindi which is what matters. My liking for hindi was so much that i rarely went to see kannada movies during my undergrad college. I didn't miss hindi movies though. Hindi movies were of high budget, glamorous (his arms, her thighs) and exotic!! Or thats what i thought..that's what i wanted... In the hindsight, i would have loved to learn malayali as a third language (if there was some good sense arround). I would have got exposure to some smart people and movies that stimulate your intellect not genitals.
Possitive thing about this whole hindi thing in my Navodaya is that it exposed us to hindi people and navodayas run by hindi people. Navodayas in MP that we migrated was, expectedly, bimaru Navoday run by currupt hindians.. we scared of going there..it repeatedly made kannada students dumb and indisciplined.
Having been a product of navodaya myself, i agree with you that education should be a matter of states. We should be true republic as a country. Centre should play least minimal role possible. The concept of navodaya itself can come only from a country like india. Where else can you see a government spending better resources for talented students!! Remember Nehru encouraged elite centres of higher learning like IITs, IIMs, IISc at the cost of primary education. Its the same thing. I fail to understand how elders can think educating smart few children educates a country.

I totally agree that hindi in navodaya should be given as much importance as any other non kannada languages. immingration should be multi directional (not hindi to non-hindi). Hindi in NVs is a serious problem because of the numbers. But there are CBSE schools in Karnataka that DO NOT TEACH KANNADA at all. They teach english as first languate and hindi as second language. My uncle sent two of his children to a payed CBSE residential scholl in mangalore because they couldn't make it to navodaya. I was horrified to learn that they don't learn kannada anymore!!

Epilogue:
Europeans to UR Ananthamurthy: we heard that government of karnataka with the globalized city like bangalore is making kannada composory in schools. Is it true?
UR Anathamurthy: I heard english is compulsory in england and french in france. is it true?

-Siddaraju Boregowda

Anonymous ಅಂತಾರೆ...

Good article...can you also please highlight how Morarji Desai schools make Kannada compulsory and do not teach any other languages like Tulu, lambaani etc which are spoken by quite sizable population in Karnataka??

Anonymous ಅಂತಾರೆ...

Dear Sir,

You are right. Banavasi balaga's stance on regional languages of karnataka is very clear. you need not worry about it sarcastic about BB.

see these posts :
1. http://enguru.blogspot.com/2010/03/shaaleyalli-tulu-kalisodu-olle-nade.html
2.http://enguru.blogspot.com/2007/11/blog-post_06.html

Regards

Sundar

Priyank ಅಂತಾರೆ...

@Anonymous
ಕರ್ನಾಟಕದ ಮಕ್ಕಳ ಮೇಲೆ ಹಿಂದಿ ಕಲಿಕೆಯ ಹೊರೆ ಹಾಕುವ ಬದಲು, ಕೊಡವ, ತುಳು, ಕೊಂಕಣಿ, ಲಂಬಾಣಿ ಇಂತಹ ನಮ್ಮ ನೆಲದ ಭಾಷೆಗಳನ್ನು ಕಲಿಯುವ ಆಯ್ಕೆ ಕೊಡುವುದು ಉತ್ತಮ.
ಭಾಷೆ ಕಲಿಕೆಯು ಆಯ್ಕೆಯಾಗಿರಬೇಕೇ ಹೊರತು ವ್ಯವಸ್ಥಿತ ಹೇರಿಕೆಯಾಗಬಾರದು.

ಉಉನಾಶೆ ಅಂತಾರೆ...

ಏನ್ಗುರು:
ಸಮಯೋಚಿತವಾದ ಈ ಪೂರಕ ಲೇಖನ ಬರೆದಿದ್ದಕ್ಕೆ ಧನ್ಯವಾದ.
ಕೇಂದ್ರ ಸರಕಾರದ "ಹಿಂದಿ ಹೇರಿಕೆ" ಕಾರ್ಯಕ್ರಮದ ಬಗ್ಗೆ ಅರಿವು ಎಲ್ಲರಲ್ಲಿ ಸಮನಾಗಿ ಇರುವುದಿಲ್ಲ.
ನಿಮ್ಮ ಲೇಖನಗಳು ಹೆಚ್ಚು ಜನರನ್ನು ತಲುಪಲು ಈ ಬಗೆಯ ವಿವರಗಳು ನೆರವಾಗುತ್ತವೆ.

Siddaraju Boregowda:
ಧನ್ಯವಾದಗಳು. ತಮ್ಮ ವಿವರವಾದ ಪ್ರತಿಕ್ರಿಯೆಗಾಗಿ.

ಇತೀ, ಉಉನಾಶೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails