ಸದ್ಯಕ್ ಇವ್ರು ಕರ್ನಾಟಕದ ಮುಖ್ಯಮಂತ್ರಿಗಳಾಗಿರಲಿ ಸಾಕು.


ದಿನಾಂಕ 03.10.2010ರ ಪ್ರಜಾವಾಣಿಯ 5ನೇ ಪುಟದಲ್ಲಿ ಬಂದಿರೋ ಸುದ್ದಿಯಂತೆ ಕರ್ನಾಟಕ ರಾಜ್ಯಸರ್ಕಾರವು ಭಾರತದ ಕೇಂದ್ರಸರ್ಕಾರಕ್ಕೆ ಭಾರತ ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದೇ ನಾಮಕರಣ ಮಾಡಲು ಪ್ರಸ್ತಾಪ ಸಲ್ಲಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಯಡ್ಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಅರೆರೆ... ಮಾಸ್ತಿ ಪುಸ್ತಕಕ್ಕೂ ಇಂಡಿಯಾ ಹೆಸರಿಗೂ ಏನಪ್ಪಾ ಸಂಬಂಧಾ? ಅನ್ನೋ ಅಚ್ಚರಿಗೆ ಉತ್ತರ ಸಿಕ್ಕಿಲ್ಲದಿದ್ದರೂ ಸದರಿ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾಗಿದ್ದ ಹಿರಿಯರೂ ಕನ್ನಡದ ಕೆಚ್ಚಿನ ಹೋರಾಟಗಾರರೂ, ಖ್ಯಾತ ಚಿಂತಕರೂ ಆಗಿರುವ ಶ್ರೀ. ಚಿದಾನಂದಮೂರ್ತಿಯವರು ಆಡಿದ ಮಾತಿಗೆ, ನೀಡಿದ ಸಲಹೆಗೆ ಸ್ಪಂದಿಸಿ ನಮ್ಮ ಮುಖ್ಯಮಂತ್ರಿಗಳು ಹೀಗಂದಿದಾರಂತೆ!

ನಮ್ಮೂರ ಹೆಸರು ಬದಲಾವಣೆ ಏನಾಯ್ತು ಯಜಮಾನ್ರೇ?

2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಶ್ರೀ. ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು. ಅದಕ್ಕೆ ಪೂರಕವಾಗಿ 2006ರ ಸೆಪ್ಟೆಂಬರ್ 27ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂತಹ ಒಂದು ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಸದರಿ ಗೊತ್ತುವಳಿಯನ್ನು ಒಪ್ಪಿಕೊಂಡ ಘನ ಕರ್ನಾಟಕ ರಾಜ್ಯಸರ್ಕಾರ ನವೆಂಬರ್ ಒಂದರಂದು ಬ್ಯಾಂಗಲೂರ್ ಹೆಸರನ್ನು ಬೆಂಗಳೂರು ಎಂಬುದಾಗಿ ಘೋಷಿಸಿತು. ಜೊತೆಗೆ ಮಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ, ಚಿಕ್ಕಮಗಳೂರು, ಕಲ್ಬುರ್ಗಿ, ವಿಜಾಪುರ, ಬಳ್ಳಾರಿ, ತುಮಕೂರು ಮತ್ತು ಕಾಪುಗಳ ಹೆಸರನ್ನೂ ಬದಲಿಸುವ ಘೋಷಣೆ ಹೊರಬಿತ್ತು. ಆಮೇಲೆ ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಒಪ್ಪಿಗೆಗಾಗಿ ಕಳಿಸಲಾಯಿತು. ಇದೆಲ್ಲಾ ಶುರುವಾಗಿದ್ದು ಧರಂಸಿಂಗ್ ಅವರ ಕಾಲದಲ್ಲಾದರೂ ಎಚ್.ಡಿ.ಕುಮಾರಸ್ವಾಮಿಯವರ ಕಾಲದಲ್ಲಿ ಗೃಹಸಚಿವಾಲಯಕ್ಕೆ ಕಳಿಸಲಾಯಿತು. 2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಕರ್ನಾಟಕ ರಾಜ್ಯಸರ್ಕಾರದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರು ಈ ಬಗ್ಗೆ ಚಕಾರ ಎತ್ತಿರೋ ಸುದ್ದಿ ಇಲ್ಲೀ ತನಕ ಬಂದಂಗಿಲ್ಲ. ತಾವೇ ಮನೆ ಯಜಮಾನ ಆಗಿರೋ ಕರ್ನಾಟಕದಲ್ಲಿರೋ ಊರುಗಳ ಹೆಸರುಗಳನ್ನು ಬದಲಾವಣೆ ಮಾಡಿಸೋಕೆ ಯಾವುದೇ ಆಸಕ್ತಿ ತೋರಿಸದೆ ಈಗ ಭಾರತದ ನಾಮಕರಣಕ್ಕೆ ಮುಂದಾಗಿರೋದು ನೋಡುದ್ರೆ, ಇವರು ತಮ್ಮನ್ನೇನು ಕರ್ನಾಟಕದ ಮುಖ್ಯಮಂತ್ರಿಗಳು ಅಂದ್ಕೋಡಿದಾರಾ ಅಥ್ವಾ ಭಾರತದ ಮುಖ್ಯಮಂತ್ರಿಗಳು ಅಂದ್ಕೊಂಡಿದಾರಾ ಅನ್ಸುತ್ತಲ್ವಾ ಗುರೂ!

4 ಅನಿಸಿಕೆಗಳು:

Anonymous ಅಂತಾರೆ...

Abhimaana iruva raajyagalella tamma oorina hesarugalannu mumbai, chennai, kolkata endu badalayisiddayitu. Nammavaru innu mannu tinta kootidave.

Gangadhara ಅಂತಾರೆ...

nanage thilida mattige hesaru badalaavane aagide aadre duranta andre ellaru inna bangalore annuttirodu

kencha ಅಂತಾರೆ...

yeDDi RSS avara kai bombe allave, avarige baree bhaarata maatra kaaNutte, kannaDa karnaaTaka kaaNolla. namage uLigaalavilla.

ಪ್ರದೀಪ ಅಡಿಗ ( Pradeep Adiga ) ಅಂತಾರೆ...

ಇತ್ತೀಚಿಗಿನ ಇವರ ಹೇಳಿಕೆಗಳು ಬಾರೆ ಮಾತು ಮಾತ್ರ. ದಿನಪತ್ರಿಕೆಯಲ್ಲಿ ಓದಿ ಅದೇ ದಿನ ಮರೆಯೋದೇ ವಾಸಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails